Skip to playerSkip to main content
  • 1 week ago
ದಾವಣಗೆರೆ: ಗುಟ್ಕಾ ನಿಷೇಧ ಹಾಗೂ ಭದ್ರಾ ಮೇಲ್ದಂಡೆಗೆ ನೀರು ಬಿಡುಗಡೆ ಮಾಡಲು ಹೊರಡಿಸಿರುವ ಆದೇಶಗಳನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಅಡಿಕೆ ಬೆಳೆಗಾರರ ಒಕ್ಕೂಟವು ಬೃಹತ್ ಪ್ರತಿಭಟನೆ ಹಾಗೂ ಪಾದಯಾತ್ರೆ ಹಮ್ಮಿಕೊಂಡಿತ್ತು. ಕಳೆದ ಮೂರು ದಿನಗಳಿಂದ ಪಾದಯಾತ್ರೆ ನಡೆಯುತ್ತಿದ್ದು, ಇಂದು ಬೃಹತ್ ಪ್ರತಿಭಟನೆಯಾಗಿ ರೂಪ ತಾಳಿತು. ದಾವಣಗೆರೆ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಹಮ್ಮಿಕೊಂಡಿದ್ದ ಪಾದಯಾತ್ರೆ ನಗರದ ಜಯದೇವ ವೃತ್ತಕ್ಕೆ ಬಂದು ತಲುಪಿತು. ಪ್ರತಿ ತಾಲೂಕಿನಿಂದ ಆಗಮಿಸಿದ್ದ ರೈತರೆಲ್ಲರೂ ಒಂದೆಡೆ ಸೇರಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ನೇತೃತ್ವದ ಬಿಜೆಪಿ ನಾಯಕರು ಕೂಡ ರೈತರ ಪಾದಯಾತ್ರೆ ಹಾಗೂ ಪ್ರತಿಭಟನೆಗೆ ಸಾಥ್ ನೀಡಿದರು.ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜೈಕಾರ ಕೂಗಿದ ಪ್ರತಿಭಟನಾನಿರತರು, ಹಸಿರು ಶಾಲು ಬೀಸಿ ಒಗ್ಗಟ್ಟು ಪ್ರದರ್ಶಿಸಿದರು. ಜಯದೇವ ವೃತ್ತದಿಂದ ಎಸಿ ಕಚೇರಿ ಕಡೆ ಸಾಗಿದ ಪಾದಯಾತ್ರೆಯಲ್ಲಿ ನೂರಾರು ರೈತರು ಭಾಗಿಯಾಗಿದ್ದರು.ಎಸಿ ಕಚೇರಿ ಬಳಿ ಹೈಡ್ರಾಮ: ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನಾನಿರತ ರೈತರು, ಎಸಿ ಕಚೇರಿ ಮುತ್ತಿಗೆಗೆ ಯತ್ನಿಸಿದರು. ಮುತ್ತಿಗೆ ತಡೆಯಲು ಪೊಲೀಸರು ಹರಸಾಹಸಪಟ್ಟರು. ವಶಕ್ಕೆ ಪಡೆದರೂ ಜಗ್ಗದ ರೈತರು, ಪೊಲೀಸ್ ವಾಹನದ ಮುಂದೆ ಕುಳಿತು ಪ್ರತಿಭಟನೆ ಮುಂದುವರಿಸಿದರು. ಎಸಿ ಕಚೇರಿಯ ಮುಂದೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ದಾಟಿ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಎಎಸ್ಪಿ ಪರಮೇಶ್ವರ್ ಹೆಗಡೆ, ಡಿವೈಎಸ್ಪಿಗಳಾದ ಶರಣಬಸವೇಶ್ವರ, ಬಸವರಾಜ್ ಅವರು ಪ್ರತಿಭಟನಾಕಾರರನ್ನು ತಡೆದರು.‌ ರೇಣುಕಾಚಾರ್ಯ, ಮಡಾಳ್ ಮಲ್ಲಿಕಾರ್ಜುನ್, ಚಂದ್ರಶೇಖರ್ ಪೂಜಾರ್‌ ಅವರನ್ನು ಪೊಲೀಸರು ವಶಕ್ಕೆ ಪಡೆಯಲು ಹರಸಾಹಸ ಪಡಬೇಕಾಯಿತು. ಕೊನೆಗೂ ನೂಕಾಟ, ತಳ್ಳಾಟದ ನಡುವೆ ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆಯಲಾಯಿತು. ಇದನ್ನೂ ಓದಿ: ಗುಟ್ಕಾ, ಪಾನ್ ಮಸಾಲಾ ನಿಷೇಧ: ಅಡಿಕೆ ಧಾರಣೆಯಲ್ಲಿ ಕುಸಿತ, ಖರೀದಿಗೆ ಬಾರದ ವ್ಯಾಪಾರಿಗಳು, ಬೆಳೆಗಾರರಲ್ಲಿ ಹೆಚ್ಚಾದ ಆತಂಕ

Category

🗞
News
Transcript
00:00I
00:33the
00:38the
00:39the
00:40the
00:40the
00:40the
00:41I don't know if I can do it.
00:43I don't know if I can.
01:21Oh
01:23Oh
01:41The
01:41The
01:41The
01:41The
01:41The
01:41Oh
01:48Oh
01:49Oh
01:53Oh
01:54Oh
01:54Oh
01:57Oh
01:57Oh
01:58Oh
02:08Oh
02:09Oh
02:10Oh
02:10Oh
02:13Oh
02:14Oh
02:14Oh
02:14Oh
02:16Oh
02:17Oh
02:18I think I think I got a job
02:47Come on, we did it, we did it, we did it, we did it, we did it!
Comments

Recommended